ಭಾನುವಾರ, ಜನವರಿ 22, 2012

ಒಂದೆ ಒಂದು ಸಾರೀ ಬೆಂಗಳೂರಿನ M G ರೋಡಿನಲ್ಲಿರುವ bible ಸೊಸೈಟಿಗೆ ಬೇಟಿ ಕೊಡಿ.

ಬೆಂಗಳೂರುರಿನ M.G ರೋಡಿನ bible societyಗೆ ಬೇಟಿ ಕೊಡಿ . Bible ನ ದೊಡ್ಡ ಸಂಗ್ರಹವೆ ಅಲ್ಲಿದೆ. ದೇವರ ವಾಕ್ಯ ಸಾರಲು ಅನುಕೂಲವಾಗುವ ಹಲವಾರು ಪುಸ್ತಕಗಳ ಸಂಗ್ರಹವು ಇದೆ. ಕನ್ನಡ ತಮಿಳು ತೆಲುಗು ಹಾಗೂ ಹಲವಾರು ಭಾಷೆಗಳ bible ಗೆ ಸಂಬಂದಪಟ್ಟ ಪುಸ್ತಕಗಳು ಇವೆ. bible society ಮಾಡುತ್ತಿರುವ ಕೆಲಸ ಸುವಾರ್ತೆ ಸೇವೆಗೆ ಬಹಳ ಸಹಾಯಕವಾಗಿದೆ. ಅದರ ಅನುಕೂಲ ನಾವು ಪಡೆಯ ಬೇಕಷ್ಟೇ. ಸುವಾರ್ತೆ ಸಾರಲು ಜಗತ್ತಿನ ಹಲವಾರು ಬಗೆಗಿನ ಯೋಚನಾಧಾರೆಗಳು ನಮಗೆ ಗೊತ್ತಾಗುತ್ತಾ ಹೋಗುತ್ತವೆ bible society ಎಲ್ಲಿ. ಎಸ್ಟೋಸಾರಿ ನಾವು ಸಿನಿಮಾ, ನಾಟಕ,t v, ಅಂತ ಕಾಲಹರಣ ಮಾಡುತ್ತೇವೆ ಆದ್ರೆ ದೇವರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಲು ಹೊಗುವುದಿಲ್ಲ. ಸಂಕಟ ಬಂದಾಗ ಮಾತ್ರ ದೇವರ ನೆನಪು ನಮಗೆ, ಹಾಗಾಗುವುದು ಬೇಡ ಸಹೊದರ ಸಹೊದರಿ ದೇವರ ವಾಕ್ಯ ಹೇಳಿದ ಹಾಗೇಯೆ ಸುವಾರ್ತೆ ಸೇವೆ ಮಾಡುವತ್ತ ಗಮನ ಹರಿಸಿ ದೇವರ ಕೃಪೆಗೆ ಪಾತ್ರರಾಗೋಣ.























ಗುರುವಾರ, ಜನವರಿ 12, 2012

ಸುವಾರ್ತೆ ಸಮಾದಾನ ಕೊಟ್ಟಿದೆ. ಜೀವನದ ಬಗ್ಗೆ ಆಸಕ್ತಿ ಮೂಡಿಸಿದೆ. ಸಾಕಲ್ಲವೇ ಬದುಕು ಚಿಗುರಲು.





ಹೆಸರು ದೇವದಾನ ದೊಡ್ಡಮನಿ ಜೀವನ ಏರಿಳಿತಗಳಿಂದ ಹದಗೆಟ್ಟು ಹೋದಾಗ ನಾನು ಮೊರೆ ಹೋಗಿದ್ದು ಸತ್ಯವೇದ ("Bible") ಓದುವ ಹವ್ಯಾಸಕ್ಕೆ . ಎಂಟು ಬಾರಿ ಸತ್ಯವೇದ ಓದಿದ ಹೆಮ್ಮೆ ನನಗೆ . ಪ್ರತಿ ದಿನ ಬೆಳಿಗ್ಗೆ ಮತ್ತು ರಾತ್ರಿ ಓದುವ ಹವ್ಯಾಸ ರೂಡಿಸಿಕೊಂಡಿರುವೆ. ಸತ್ಯವೇದದ ಕಟು ಸತ್ಯಗಳು ಗೊತ್ತಾಗುತ್ತಿವೆ. ಸಾದ್ಯವಾದಷ್ಟು ಜನರಿಗೆ ಸುವಾರ್ತೆ ಹೇಳಬೇಕೆಂದು ಮನಸು ಹಾತೊರೆಯುತ್ತಿದೆ. ಸೂಕ್ಷ್ಮವಾಗಿ ಕಾಲಕ್ಕೆ ತಕ್ಕಂತೆ ಸತ್ಯವೇದದ ಸುವಾರ್ತೆಯನ್ನು ಸಾರುತ್ತಿರುವೆ ಮತ್ತು ಅದರಂತೆಯೇ ಬದುಕಲು ಪ್ರಯತ್ನ ನಡೆಸಿರುವೆ.
ಬದುಕು ಕಲಿಸಿದ ಪಾಠ, ಇಲ್ಲಿಗೆ ತಂದು ನಿಲ್ಲಿಸಿದೆ, ಒಂದೊಂದು ಸಾರೀ ನನಗೆ ನಾನೇ ಹೆಮ್ಮೆ ಅನಿಸಿದೆ. ಸುವಾರ್ತೆ ಸಮಾದಾನ ಕೊಟ್ಟಿದೆ. ಜೀವನದ ಬಗ್ಗೆ ಆಸಕ್ತಿ ಮೂಡಿಸಿದೆ. ಸಾಕಲ್ಲವೇ ಬದುಕು ಚಿಗುರಲು.
Matthew ಬರೆದ ಸುವಾರ್ತೆ: ಆದ್ದರಿಂದ ಯೇಸು ಅವರ ಬಳಿಗೆ ಬಂದು, “ಪರಲೋಕದ ಮತ್ತು ಈ ಲೋಕದ ಅಧಿಕಾರವೆಲ್ಲವನ್ನು ನನಗೆ ಕೊಡಲಾಗಿದೆ. ಆದ್ದರಿಂದ ನೀವು ಹೋಗಿ, ಲೋಕದಲ್ಲಿರುವ ಜನರೆಲ್ಲರನ್ನು ನನ್ನ ಶಿಷ್ಯರನ್ನಾಗಿ ಮಾಡಿರಿ. ತಂದೆಯ, ಮಗನ ಮತ್ತು ಪವಿತ್ರಾತ್ಮನ ಹೆಸರಿನಲ್ಲಿ ಅವರಿಗೆಲ್ಲ ದೀಕ್ಷಾಸ್ನಾನ ಮಾಡಿಸಿ. ನಾನು ನಿಮಗೆ ಆಜ್ಞಾಪಿಸಿದವುಗಳಿಗೆಲ್ಲಾ ವಿಧೇಯರಾಗುವಂತೆ ಜನರಿಗೆ ಉಪದೇಶಿಸಿ, ಲೋಕಾಂತ್ಯದವರೆಗೂ ಸದಾಕಾಲ ನಾನು ನಿಮ್ಮೊಂದಿಗಿರುತ್ತೇನೆ” ಎಂದು ಹೇಳಿದನು.
Mark ಬರೆದ ಸುವಾರ್ತೆ: ಯೇಸು ಶಿಷ್ಯರಿಗೆ, “ಪ್ರಪಂಚದ ಎಲ್ಲಾ ಕಡೆಗೆ ಹೋಗಿರಿ. ಪ್ರತಿಯೊಬ್ಬನಿಗೂ ಸುವಾರ್ತೆಯನ್ನು ಹೇಳಿರಿ. ನಂಬಿಕೆಯಿಟ್ಟು, ದೀಕ್ಷಾಸ್ನಾನ ಮಾಡಿಸಿಕೊಳ್ಳುವವನು ರಕ್ಷಣೆಹೊಂದುವನು. ಆದರೆ ನಂಬದವನು ಅಪರಾಧಿ ಎಂಬ ನಿರ್ಣಯ ಹೊಂದುವನು. ನಂಬುವವರಾದರೋ ಅದ್ಭುತಕಾರ್ಯಗಳನ್ನು ಮಾಡುವರು. ಅವರು ನನ್ನ ಹೆಸರಿನ ಮೂಲಕ ದೆವ್ವಗಳನ್ನು ಬಿಡಿಸುವರು. ತಾವೆಂದೂ ಕಲಿತಿಲ್ಲದ ಭಾಷೆಗಳಲ್ಲಿ ಮಾತನಾಡುವರು. ಅವರು ಹಾವುಗಳನ್ನು ಹಿಡಿದುಕೊಂಡರೂ ಅವು ಅವರನ್ನು ಕಚ್ಚುವುದಿಲ್ಲ. ವಿಷಕುಡಿದರೂ ಅವರಿಗೆ ಯಾವ ತೊಂದರೆಯೂ ಆಗುವುದಿಲ್ಲ. ಅವರು ಮುಟ್ಟಿದರೆ ರೋಗಿಗಳು ಗುಣಹೊಂದುವರು” ಎಂದು ಹೇಳಿದನು