ಸೋಮವಾರ, ಜೂನ್ 25, 2012

ಪಾದ್ರಿಯಾದ ವಿಜಯ್ ಮಲ್ಯ ಪುತ್ರ!. ಕತ್ತಲಿನಿಂದ ಬೆಳಕಿನಡೆಗೆ ಸಿದ್ದಾರ್ಥ್ ಮಲ್ಯ.

ಬೆಂಗಳೂರು: ಇದನ್ನು ಭೂಮಿಯ ಮೇಲಿರುವ ಯಾರೂ ಕೂಡ ಊಹಿಸಿರಲಿಕ್ಕಿಲ್ಲ, ಕಂಪನಿ ವ್ಯವಹಾರ, ಸಿಕ್ಕಸಿಕ್ಕ ಹುಡುಗಿಯರೊಂದಿಗೆ ಪಾರ್ಟಿ ಮತ್ತು ಬಾಲಿವುಡ್ ಹೆಚ್ಚಿನ ಎಲ್ಲಾ ಪಾರ್ಟಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಉದ್ಯಮಿ ವಿಜಯ್ ಮಲ್ಯರ ಪುತ್ರ ಸಿದ್ದಾರ್ಥ್ ಮಲ್ಯ ಚರ್ಚ್ ಪಾದ್ರಿಯಾಗಿದ್ದಾರೆ ಆದರೆ ಇದು ನಿಜ.
ಯುಬಿ ಗ್ರೂಪ್ ಆಡಳಿತ ನಿರ್ದೇಶಕರಲ್ಲಿ ಒಬ್ಬರಾಗಿರುವ ಸಿದ್ದಾರ್ಥ್ ಮಲ್ಯ ತಾನು ಯೂನಿವರ್ಸಲ್ ಲೈಫ್ ಚರ್ಚ್ ಪ್ರಮಾಣಿಕೃತ ಪಾದ್ರಿಯೆಂದು ವಿಶ್ವಕ್ಕೆ ಹೇಳಿಕೊಂಡಿದ್ದಾರೆ. ಅವರು ಈಗ ಪಾದ್ರಿ ಮಾಡುವಂತಹ ಎಲ್ಲಾ ಕಾರ್ಯಗಳನ್ನು ಮಾಡಬಹುದಾಗಿದೆಯಂತೆ. ಜೂನಿಯರ್ ಮಲ್ಯ ಸ್ಫೋಟಕ ವಿಷಯವನ್ನು ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ. ಟ್ವಿಟ್ಟರ್ ನಲ್ಲಿ ಸಿದ್ದಾರ್ಥ್ ಹೀಗೆ ಬರೆದಿದ್ದಾರೆ. ನನ್ನ ಪ್ರಮಾಣಪತ್ರ ನಾನು ದೀಕ್ಷೆ ಪಡೆದಿರುವುದನ್ನು ತೋರಿಸುತ್ತದೆ. ನಾನು ಈಗ ಕಾನೂನು ಬದ್ಧವಾಗಿ ರೆವರೆಂಡ್ ಮಲ್ಯ ಎಂದು ಕರೆದುಕೊಳ್ಳಬಹುದು. ಮತ್ತಷ್ಟು ಟ್ವಿಟ್ ಮಾಡಿರುವ ಸಿದ್ದಾರ್ಥ್, ನಾನು ಇನ್ನು ಮದುವೆ, ಉತ್ತರಕ್ರಿಯೆ, ಬ್ಲೆಸ್ಸಿಂಗ್, ಉಪನ್ಯಾಸ ಮತ್ತು ಸಭೆಗಳನ್ನು ನಡೆಸಬಹುದು ಎಂದು ಬರೆದುಕೊಂಡಿದ್ದಾರೆ. ಆದರೆ ಮಲ್ಯ ರೀತಿಯ ನಿರ್ಧಾರ ತೆಗೆದುಕೊಳ್ಳಲು ಕಾರಣವೇನು? ಆತ್ಮಸಾಕ್ಷಿಯ ಕರೆಯೇ? ಸಿದ್ದಾರ್ಥನೇ ಇದಕ್ಕೆ ಉತ್ತರಿಸಬೇಕು.