ಶುಕ್ರವಾರ, ಜುಲೈ 26, 2013

ಧಾರವಾಡದ ಪುರಾತನ ಬಾಸೆಲ್ ಮಿಷನ್ ಚರ್ಚ್ (1844-45).


ಪುರಾತನ ಚರ್ಚ್ಗಳಲ್ಲಿ ಒಂದಾದ ಬಾಸೆಲ್ಮಿಷನ್ಚರ್ಚ್ಧಾರವಾಡದ ರೈಲ್ವೆ ನಿಲ್ದಾಣಕ್ಕೆ ಹೋಗುವ ಮಾರ್ಗದಲ್ಲಿದ್ದು  ನೋಡಲೇ ಬೇಕಾದ ತಾಣ. ಪುರಾತನ ಚರ್ಚ್ಗಳಲ್ಲಿ ಒಂದಾದ ಬಾಸೆಲ್ ಮಿಷನ್ ಚರ್ಚ್ ಧಾರವಾಡದ ರೈಲ್ವೆ ನಿಲ್ದಾಣಕ್ಕೆ ಹೋಗುವ ಮಾರ್ಗದಲ್ಲಿ ಬಾಸೆಲ್ ಮಿಷನ್ ಆವರಣಕ್ಕೆ ಹೊಂದಿಕೊಂಡಂತೆ ಇದೆ. ಬಾಸೆಲ್ ಮಿಷನರಿ ಸೊಸೈಟಿ 1844-45ರಲ್ಲಿ ಚರ್ಚ್ ನಿರ್ಮಿಸಿತ್ತು. ಸುಮಾರು 76 ಅಡಿ ಉದ್ದ , 42 ಅಡಿ ಅಗಲ ಹಾಗೂ ಕೋನಾಕಾರದ 24 ಅಡಿ ಎತ್ತರವಾಗಿ ಚರ್ಚ್ ಮನಮೋಹಕವಾಗಿ ಕಂಗೊಳಿಸುತ್ತಿದೆಯಲ್ಲದೆ, ಕ್ರಿಶ್ಚಿಯನ್ನರ ಸಾಕ್ಷಿ ಕೇಂದ್ರವಾಗಿದೆ. ಅದೇ ರೀತಿ ಧಾರವಾಡ-ಹಳಿಯಾಳ ರಸ್ತೆಯಲ್ಲಿ ಬರುವ "ಆಲ್ ಸೇಂಟ್ಸ್ ಚರ್ಚ್' ಹಳೆಯ ಚರ್ಚ್ಗಳಲ್ಲಿ ಒಂದಾಗಿದೆ. 1888ರಲ್ಲಿ ಸುಮಾರು ಎರಡು ಎಕರೆ ಪ್ರದೇಶಗಳಲ್ಲಿ ಚರ್ಚ್ನ್ನು ನಿರ್ಮಿಸಲಾಗಿದೆ.

ಸೋಮವಾರ, ಜುಲೈ 22, 2013

ಮೋದಿ ಪ್ರಧಾನಿಯಾಗುವುದು ಸೇನ್ಗೆ!(ನೋಬೆಲ್ ಪ್ರಶಸ್ತಿ ವಿಜೇತ) ಬೇಕಾಗಿಲ್ವಂತೆ. ಅವರು ದೇಶದ ಅಲ್ಪಸಂಖ್ಯಾತರ ಸುಭದ್ರತೆಗಾಗಿ ಹೆಚ್ಚಿಗೆ ಏನನ್ನೂ ಮಾಡಿಲ್ಲ".

ಮೋದಿ ಪ್ರಧಾನಿಯಾಗುವುದು ಸೇನ್ಗೆ ಬೇಕಾಗಿಲ್ವಂತೆ! ಗುಜರಾತ್ ಮುಖ್ಯಮಂತ್ರಿ ಮತ್ತು ಬಿಜೆಪಿಯ ಚುನಾವಣಾ ಸಮಿತಿಯ ಅಧ್ಯಕ್ಷ ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾಗುವುದನ್ನು ತಾವು ಬಯಸುವುದಿಲ್ಲ ಎಂದು ನೋಬೆಲ್ ಪ್ರಶಸ್ತಿ ವಿಜೇತ ಖ್ಯಾತ ಅರ್ಥಶಾಸ್ತ್ರಜ್ಞ ಅಮಾರ್ತ್ಯ ಸೇನ್ ಅವರು ಸ್ಪಷ್ಟ ನುಡಿಗಳಲ್ಲಿ ಹೇಳಿದ್ದಾರೆ.ಸೋಮವಾರ ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ, "ಒಬ್ಬ ಭಾರತೀಯನಾಗಿ ನನಗೆ ನರೇಂದ್ರ ಮೋದಿ ಭಾರತದ ಪ್ರಧಾನಿಯಾಗುವುದು ಬೇಕಾಗಿಲ್ಲ. ಅವರು ದೇಶದ ಅಲ್ಪಸಂಖ್ಯಾತರ ಸುಭದ್ರತೆಗಾಗಿ ಹೆಚ್ಚಿಗೆ ಏನನ್ನೂ ಮಾಡಿಲ್ಲ" ಎಂದು ಅಮಾರ್ತ್ಯ ಸೇನ್ ನುಡಿದಿದ್ದಾರೆ."ಅಲ್ಪಸಂಖ್ಯಾತರ ಭದ್ರತೆಗೆ ಸಂಬಂಧಿಸಿದಂತೆ ಮೋದಿ ಅವರ ರೆಕಾರ್ಡ್ ಅಷ್ಟು ಚೆನ್ನಾಗಿಲ್ಲ. ಅಲ್ಪಸಂಖ್ಯಾತರು ಮತ್ತೆ ದೇಶದಲ್ಲಿ ಅಭದ್ರತೆ ಅನುಭವಿಸುವುದು ಬೇಕಾಗಿಲ್ಲ .