ಬುಧವಾರ, ನವೆಂಬರ್ 14, 2012

ಮಿಶನರಿ ಸೇವೆ - ತಾಂಜಾನಿಯಾಕ್ಕೆ ಮಂಗಳೂರಿನ ಧರ್ಮಗುರುಗಳು.


ತಾಂಜಾನಿಯಾಕ್ಕೆ ಮಂಗಳೂರಿನ ಧರ್ಮಗುರುಗಳು - ಆಫ್ರಿಕಾದ ತಾಂಜಾನಿಯಾದಲ್ಲಿ ಧಾರ್ಮಿಕ ಸೇವೆಯ ಕೈಂಕರ್ಯವನ್ನು ಮಂಗಳೂರು ಕ್ಯಾಥೊಲಿಕ್ ಧರ್ಮ ಪ್ರಾಂತ್ಯ ಕೈಗೆತ್ತಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಮೊದಲ ತಂಡದ ಇಬ್ಬರು ಧರ್ಮಗುರುಗಳು ಬುಧವಾರ ತಾಂಜಾನಿಯಾಕ್ಕೆ ಪ್ರಯಾಣ ಬೆಳೆಸಿದರು. ಭಾರತದ ಮಾಜಿ ರಾಷ್ಟ್ರೀಯ ಕ್ಯಾಥೊಲಿಕ್ ಯುವಜನ ನಿರ್ದೇಶಕ ಫಾ| ಆಲ್ವಿನ್ ಡಿ'ಸೋಜಾ ಮತ್ತು ಮಡಂತ್ಯಾರ್ ಚರ್ಚ್ನ ಸಹಾಯಕ ಗುರು ಫಾ| ರೊನಾಲ್ಡ್ ಪಿಂಟೊ ಅವರು ತಾಂಜಾನಿಯಾಕ್ಕೆ ತೆರಳಿದವರು.